Abundance-Kannada | Pyramid Valley
top of page
website header.png

June 16th - 22nd

ನಿರಂತರತೆ, ಉಸಿರಾಟ, ಧ್ಯಾನ ಮತ್ತು ಆಹಾರದ ಆಧಾರದ ಮೇಲೆ ಪರಿಕರಗಳು ಮತ್ತು ಕೌಶಲತೆಗಳನ್ನ ಅರ್ಥಮಾಡಿಕೊಳ್ಳಿ ಮತ್ತು ಅಭ್ಯಾಸ ಮಾಡಿ
ಕಾರ್ಯಕ್ರಮದ ಉದ್ದೇಶಗಳು:

 

೧) ದೈಹಿಕ ಆರೋಗ್ಯ ಸುಧಾರಣೆ :

ದೈಹಿಕ ಆರೋಗ್ಯ ಸುಧಾರಿಸುವುದು ಸಮೃದ್ಧಿ ಸಂಪದ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ನಾವಿಲ್ಲಿ ವ್ಯಾಯಾಮ, ಪ್ರಾಣಾಯಾಮ, ಧ್ಯಾನ, ಆರೋಗ್ಯಕರ ಆಹಾರ, ವಿಶ್ರಾಂತಿ, ನಿದ್ರೆಯಂತಹ ಶರೀರಕ್ಕೆ ನವಚೈತನ್ಯ ನೀಡಬಲ್ಲ ಚಟುವಟಿಕೆಗಳ ಮೇಲೆ ಕೇಂದ್ರಿಕರಿಸುತ್ತೇವೆ.

ವಿಷಯ :

ಶರೀರವು ಚೈತನ್ಯಶೀಲವಾಗಿರಲು ಮುಂಜಾನೆಯ ಯೋಗ ನಮ್ಮನ್ನು ನಿಸರ್ಗದೊಡನೆ ನೇರ ಸಂಪರ್ಕ ಕಲ್ಪಿಸಲು ಸಹಕಾರಿಯಾಗಿದೆ. ಪ್ರಕೃತಿಯೊಂದಿಗಿನ ಒಡನಾಟ, ನಡಿಗೆ ನಮಗೆ ಉಲ್ಲಾಸದಿಂದಿರಲು ಪೂರಕವಾಗಿವೆ. ಪೌಷ್ಟಿಕಾಂಶಯುಕ್ತ, ರುಚಿಕರವಾದ ಆಹಾರ ನಮ್ಮ ದೇಹಕ್ಕೆ ನವೋತ್ಸಾಹ ನೀಡಲು ಹೇಗೆ ಪರಿಣಾಮಕಾರಿ ಎಂಬುವುದರ ಕುರಿತು ಕಾರ್ಯಾಗಾರ.
 

೨) ಮಾನಸಿಕ ಸ್ಥಿರತೆ ಮತ್ತು ಆರೋಗ್ಯ :

"ಆರೋಗ್ಯಕರ ಮನಸ್ಸು ಸಮೃದ್ಧ ಜೀವನದ ಕೈಗನ್ನಡಿ" ನಾವೆಲ್ಲ ಮಾನಸಿಕ ಸ್ಥಿರತೆ, ಒತ್ತಡ ನಿಯಂತ್ರಣ, ಆತಂಕ ನಿವಾರಣೆ ಮಾಡಲು ನಮ್ಮ ತಯಾರಿ ಹೇಗಿರಬೇಕೆಂಬುವುದರ ಬಗ್ಗೆ ಅಭ್ಯಾಸ ಮಾಡುತ್ತೇವೆ.

ವಿಷಯ :

"ಮನವೊಂದು ಮರ್ಕಟದಂತೆ" ಮನವನ್ನು ಮುದುಡಲು ಬಿಡದೆ ಅದಕೆ ಸತತವಾಗಿ ಸಂತಸಕರ ಸಂಗತಿಗಳ ತುಂಬುತಲಿರಬೇಕು. ಹೀಗಾದಾಗ ಮಾತ್ರ ಅದು ಶಾಂತವಾಗಿರಬಲ್ಲದು. ಮನಸ್ಸಿನ ಒತ್ತಡ ಕಡಿಮೆಗೊಳಿಸುವ ಕೌಶಲಗಳ ಕುರಿತು ಈ ಕಾರ್ಯಾಗಾರ ತಿಳಿಸುತ್ತದೆ. ಇಲ್ಲಿ ಸ್ವಯಂ ಅಭಿವ್ಯಕ್ತಿ, ಕಲೆ, ಸೃಜನಶೀಲ ಬರವಣಿಗೆ, ಭಾವನೆಗಳ ನಿಯಂತ್ರಣ ಮುಂತಾದ ಬೌದ್ಧಿಕ ವ್ಯಾಯಾಮಗಳೆಡೆಗೆ ನಾವು ಸಾಗುತ್ತೇವೆ.
 

೩) ಆಧ್ಯಾತ್ಮಿಕ ಆರೋಗ್ಯ ಮತ್ತು ಬೆಖವಣಿಗೆ :

ನಮಗೆ ನಿಲುಕದ ಅದೆಷ್ಟೋ ಪ್ರಶ್ನೆಗಳಿಗೆ ನಾವು ಉತ್ತರ ಬಯಸಿ ಬಂದು ನಿಲ್ಲುವುದು ಆಧ್ಯಾತ್ಮವೆಂಬ ಅರಮನೆಯ ದ್ವಾರ ಬಾಗಿಲಿಗೆ ಆಧ್ಯಾತ್ಮದ ಕೊಂಡಿ ಸದಾ ನಮ್ಮನು ಸುತ್ತಲಿನ ಪ್ರಪಂಚದೊಂದಿಗೆ ಸಂಪರ್ಕ ಹೊಂದಲು ಸಹಕರಿಸುತ್ತದೆ. ನಾವು ನಮ್ಮ ಅಂತರಂಗದೊಂದಿಗೆ ಸಂಪರ್ಕ ಸಾಧಿಸಲು ಜೀವಿತದ ಉದ್ದೇಶವನ್ನು ಅರ್ಥೈಸಿಕೊಳ್ಳಲು ಅದನ್ನು ಗಾಢವಾಗಿಸಲು ವಿವಿಧ ಆಧ್ಯಾತ್ಮಿಕ ಅಭ್ಯಾಸಗಳನ್ನು ಅನ್ವೇಷಿಸುತ್ತೇವೆ.

ವಿಷಯ :

ನಮ್ಮ ಅಂತರಂಗದೊಡನೆ ಸಂಪರ್ಕ ಸಾಧಿಸಲು ಧ್ಯಾನ, ಪ್ರಾರ್ಥನೆ, ಪಠಣ ಮುಂತಾದ ವಿಭಿನ್ನ ಆಧ್ಯಾತ್ಮಿಕ ಅಭ್ಯಾಸಗಳ ಶೋಧನೆ, ಆಲೋಚನೆ-ಅಭ್ಯಾಸ- ಭಾವನೆಗಳ ನಡುವರು ಸೂಕ್ಷ್ಮ ಅರಿಯುವುದು ಅಳವಡಿಸಿಕೊಳ್ಳುವುದನ್ನು ಕಲಿಯುತ್ತೇವೆ.
 

೪) ವೈಯಕ್ತಿಕ ಬೆಳವಣಿಗೆ ಮತ್ತು ಸ್ವಯಂ ಅರಿವು :

ವ್ಯಕ್ತಿಗತ ಬೆಳವಣಿಗೆ ನಮ್ಮ ಜೀವನದಲ್ಲಿ ಸಮಷ್ಟಿ ಸಮೃದ್ಧಿಯೆಡೆಗೆ ನಾವು ಹೊರಳುವಂತೆ ಮಾಡುವುದರೊಂದಿಗೆ ಸ್ವಯಂ ಅರಿವನ್ನು ಮೂಡಿಸುತ್ತದೆ. ನಮ್ಮ ಸಾಮರ್ಥ್ಯ, ಜೀವನದ ಗುರಿ-ಉದ್ದೇಶ, ದೌರ್ಬಲ್ಯಗಳ ಪರಿಚಯಿಸಿ ನಮ್ಮ ಆಳವಾದ ತಿಳುವಳಿಕೆಯನ್ನು ಅಭಿವೃದ್ಧಿ ಪಡಿಸುವ ಮಾರ್ಗಗಳನ್ನು ತೆರೆದಿಡುತ್ತದೆ.

ವಿಷಯ :

ನಮ್ಮ ವ್ಯಕ್ತಿಗತ ಮೌಲ್ಯಗಳು, ಗುರಿ, ಆಕಾಂಕ್ಷೆಗಳನ್ನು ಅನ್ವೇಷಿಸಲು ಆತ್ಮಾವಲೋಕನ, ಧ್ಯಾನ, ವ್ಯಾಯಾಮಗಳು ಎಷ್ಟು ಪರಿಣಾಮಕಾರಿ ಎಂಬುವುದರ ಕುರಿತು ಕಾರ್ಯಾಗಾರ. ಇಲ್ಲಿ ಅನುಕಂಪ ಮತ್ತು ತಿಳುವಳಿಕೆಯನ್ನು ಉತ್ತೇಜಿಸಲು ಗುಂಪು ಚಟುವಟಿಕೆ ಮತ್ತು ವ್ಯಾಯಾಮ ಸಹಕಾರಿಯಾಗಿವೆ.
 

೫) ಸಂಬಂಧಗಳು ಮತ್ತು ಸಮುದಾಯ ನಿರ್ಮಾಣ :

ನಂಬಿಕೆ, ಸ್ನೇಹ, ನಿಸ್ಪೃಹತೆಗಳು ಸಾಮಾಜಿಕ ಸಂಬಂಧಗಳನ್ನು ಕಟ-ಗಟ್ಟಿಗೊಳಿಸುವ ಪ್ರಾರಂಭಿಕ ಮೆಟ್ಟಿಲುಗಳು. ಇದು ಈ ದಿನದ ಕಾರ್ಯಾಗಾರದ ಪ್ರಮುಖ ಅಂಶ. ನಾವಿಲ್ಲಿ ಸಾಮಾಜಿಕ ಸಂಬಂಧಗಳನ್ನು ಆಳವಾಗಿಸಲು ಮತ್ತು ಮುಂದುವರಿಸಿಕೊಂಡು ಹೋಗಲು ಸಮುದಾಯ ಪ್ರಜ್ಞೆಯನ್ನು ಬೆಳೆಸುವ ಮಾರ್ಗಗಳನ್ನು ಶೋಧಿಸುತ್ತೇವೆ.

ವಿಷಯ :

ನಾವಿಲ್ಲಿ ಉತ್ತಮ ಸಮುದಾಯದ ನಿರ್ಮಾಣದಲ್ಲಿ ಸಮಾಜದ ನನ್ನಪುಟ್ಟ ಸಂಬಂಧ, ಕುಟುಂಬ, ಸಂಘ, ಗುಂಪು ಚಟುವಟಿಕೆಗಳು, ಉತ್ತಮ ಸಂವಹನ, ಸಂಘರ್ಷ ಪರಿಹಾರಗಳ ಕುರಿತು ಕಾರ್ಯಾಗಾರ ಕೈಗೊಳ್ಳುತ್ತೇವೆ. ಸಂಬಂಧ ಮತ್ತು ಸಂಪರ್ಕ ಉತ್ತೇಜಿಸಲು ಗುಂಪು ವಿಹಾರ ಚಟುವಟಿಕೆ, ಆರೋಗ್ಯಕರ ಚರ್ಚೆ, ಸಂವಾದ, ಮಾತುಕತೆ ಇತ್ಯಾದಿಗಳನ್ನು ಸಾಧಿಸಲು ಯತ್ನಿಸುತ್ತೇವೆ.

"ಸಮೃದ್ಧಿ ಸಂಪದ" ಆಧ್ಯಾತ್ಮಿಕ ಕಾರ್ಯಕ್ರಮದ ಉದ್ದೇಶಗಳು ಮತ್ತು ವಿಷಯದ ಬಗ್ಗೆ ಈ ವಿವರಣೆಯು ನಿಮಗೆ ಉತ್ತಮ ತಿಳುವಳಿಕೆಯನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ.

Program donation for all 7days based on the choice of accommodation:

  • Dormitory (separate for Gents, Ladies): Rs. 11000 per person

  • Twin Sharing, Standard rooms (limited) : Rs. 15700 per person

  • Single occupancy, Deluxe rooms (limited): Rs. 22000 per person

Program donation includes food, accommodation charges and venue costs. More info on the accommodation type, are available at www.pyramidvalley.org/accommodationTotal number of participants is limited. Book your slot at the earliest.

Consider your payment receipt sent on your registered email as confirmation.

You will receive a phone call and an email explaining more details on the program approximately 3-days before the start of the program.

Program rules & criteria:

  • All participants must be older than 16 years and sufficiently fit to be able to move around the campus comfortably.

  • All participants should be able to stay away from mobile phones & internet for the entire 7-day duration of the program.

  • All participants should stay committed to the program for the whole 7 days, and follow the timings strictly.

  • All sessions and instructions will be in KANNADA

  • Mobile phones and other digital devices will have to be surrendered for safekeeping on the first day and will be returned on the last day of the retreat.

  • Only emergency calls will be allowed from a separate / dedicated number at specified times on non-silence days

  • All participants should follow current COVID-19 guidelines prescribed by the Goverment of Karnataka

  • All participants should check-in on June 16th '2pm' and check-out on June 22nd '4pm'

[Downloader.la]-64608e289ee40.jpg
IMG_4252_Original.JPG

Meet Your Teacher

Shankar S Jagadal

ಶ್ರೀಯುತ ಶಂಕರ .ಎಸ್. ಜಗದಾಳ MA, Bed, BCT, PGDCT ಅವರು ಗೌರವಾನ್ವಿತ ಮತ್ತು ಅನುಭವಿ ಶಿಕ್ಷಣತಜ್ಞರಾಗಿದ್ದು, ಕರ್ನಾಟಕದ ಬೆಳಗಾವಿ ಜಿಲ್ಲೆ ಮತ್ತು ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಶಾಲೆಗಳನ್ನು ಸ್ಥಾಪಿಸುವಲ್ಲಿ ಮತ್ತು ಅವುಗಳನ್ನು ಪ್ರಭುದ್ಧವಾಗಿ ಮುನ್ನಡೆಸಿಕೊಂಡು ಹೋಗುವಲ್ಲಿ ಅಪಾರವಾದ ಪರಿಣತಿಯನ್ನು ಹೊಂದಿದ್ದಾರೆ. ಕರ್ನಾಟಕದ ಬಾಗಲಕೋಟ ಜಿಲ್ಲೆಯಲ್ಲಿ ಜನಿಸಿದ ಅವರು ಎರಡು ದಶಕಗಳಿಂದ ಪ್ರಾಂಶುಪಾಲರಾಗಿ ಮತ್ತು ಅಪಾರ ಸಾಧನೆ ಮಾಡಿದ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಬಾಗಲಕೋಟೆಯಲ್ಲಿ ಸೇವೆಯಲ್ಲಿದ್ದಾಗ ಮಕ್ಕಳಿಗೆ ಯೋಗ, ಧ್ಯಾನ, ಪ್ರಾಣಾಯಾಮದ ಬಗ್ಗೆ ನಿರಂತರವಾಗಿ ಮಾರ್ಗದರ್ಶನ ಮಾಡುತ್ತಾ ವಿದ್ಯಾರ್ಥಿಗಳನ್ನು ಮಾನಸಿಕವಾಗಿ, ಬೌದ್ಧಿಕವಾಗಿ ಸದೃಢಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಷ್ಟೇ ಅಲ್ಲದೆ ಬಾಗಲಕೋಟೆಯ ಸುತ್ತಮುತ್ತಲಿನಲ್ಲಿ ಯೋಗ, ಧ್ಯಾನ, ಪ್ರಾಣಾಯಾಮಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರಗಳನ್ನು ಮಾಡಿ ಜನರಿಗೆ ಆಧ್ಯಾತ್ಮಿಕ ಸವಿಯನ್ನು ಉಣಬಡಿಸಿದ್ದಾರೆ. ಶಿಕ್ಷಣದಲ್ಲಿ ತಮ್ಮ ಕೆಲಸದ ಜೊತೆಗೆ, ಶಂಕರ ಅವರು ಸಾವಯವ ಕೃಷಿಯ ಬಗ್ಗೆ ಒಲವು ಹೊಂದಿದ್ದಾರೆ. ಪಿರಮಿಡ್ ವ್ಯಾಲಿಯಲ್ಲಿ 'ಗೋಶಾಲೆ' ಸ್ಥಾಪಿಸುವಲ್ಲಿ ಹಾಗೂ ಅದನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಪಿರಮಿಡ್ ವ್ಯಾಲಿ ಇಂಟರನ್ಯಾಶನಲ್‌ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ.

ಶಂಕರ ಅವರು ಭಾರತೀಯ ತತ್ತ್ವಶಾಸ್ತ್ರ ಮತ್ತು ಆಧ್ಯಾತ್ಮಿಕತೆಯಲ್ಲಿ ಆಳವಾಗಿ ಆಸಕ್ತಿ ಹೊಂದಿದ್ದಾರೆ. ಹಲವಾರು ಕಾರ್ಯಾಗಾರಗಳನ್ನು ಮಾಡುವುದರ ಮೂಲಕ ಅನೇಕ ಆಧ್ಯಾತ್ಮಿಕ ತಂತ್ರಗಳನ್ನು, ಕೌಶಲಗಳನ್ನು ಪಡೆದುಕೊಂಡಿದ್ದಾರೆ. ಅವರ ಅಪಾರವಾದ ಆಧ್ಯಾತ್ಮಿಕ ಪರಿಣತಿಯಿಂದ ಅನೇಕ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು, ಕಾರ್ಯಾಗಾರಗಳನ್ನು ಏರ್ಪಡಿಸಿ ಯಶಸ್ವಿಗೊಳಿಸಿದ್ದಾರೆ. ಅಲ್ಲದೆ ಸೃಜನಶೀಲವಾಗಿ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಯಾರಿಸುವಲ್ಲಿ ಶಂಕರರು ಸಿದ್ಧಹಸ್ತರು. ಅವರ ಸೃಜನಶೀಲ ಆಧ್ಯಾತ್ಮಿಕ ಕಾರ್ಯಕ್ರಮಗಳು ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿವೆ. ಇವರ "ಸಮೃದ್ಧಿಯ ಸಂತೋಷ" ಕಾರ್ಯಾಗಾರವು ಜನರು ತಮ್ಮ ಮಾನಸಿಕ ಸಮತೋಲನ ಕಾಯ್ದುಕೊಳ್ಳುವಂತೆ ಮಾಡಲು ಸಹಕಾರಿಯಾಗಿದೆ. ಜನರ ಮಾನಸಿಕ ದೌರ್ಬಲ್ಯಗಳನ್ನು ಹಿಮ್ಮೆಟ್ಟಿಸಿ ಜೀವನದ ಸುಖ, ಸಂತೋಷವನ್ನು ಸದಾ ಅನುಭವಿಸಲು ಶಂಕರ ಅವರ ಈ ಕಾರ್ಯಾಗಾರವು ಉತ್ತೇಜನ ನೀಡಿದೆ.

ಶಂಕರ ಅವರು ಅಪಾರವಾದ ಆಸಕ್ತಿ ಹಾಗೂ ಸೃಜನಶೀಲ ವ್ಯಕ್ತಿತ್ವವುಳ್ಳವರು. ಅಂತೆಯ ಆಕರ್ಷಕವಾದ ಅವರ ಕೆಲಸ ಕಾರ್ಯಗಳು ಜನರನ್ನು ಆಧ್ಯಾತ್ಮಿಕ ಪ್ರಪಂಚದೆಡೆಗೆ ಸೆಳೆಯುತ್ತಿವೆ. ಅವರ ಪರಿಣಾಮಕಾರಿ ಕಾರ್ಯಾಗಾರಗಳ ಫಲವಾಗಿ ಜನರ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆತು ಗುರಿ ತಲುಪುವಲ್ಲಿ ಸಹಕಾರಿಯಾಗಿವೆ. ಶಿಕ್ಷಣದ ಬಗೆಗಿನ ಇವರ ಒಲವು, ಸಾವಯವ ಕೃಷಿಯಲ್ಲಿನ ಇವರ ಆಸಕ್ತಿ ಹಾಗೂ ಇವರ ಆಧ್ಯಾತ್ಮಿಕ ಚಿಂತನೆಗಳು ಎಲ್ಲರನ್ನು ಆಕರ್ಷಿಸುತ್ತವೆ. ಅವರ ಈ ಬಹುಮುಖ ಪ್ರತಿಭೆಯು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮೇರು ವ್ಯಕ್ತಿಯನ್ನಾಗಿ ಗುರುತಿಸುವಂತೆ ಮಾಡಿದೆ.

bottom of page